ಮನದೊಳಗಿನ ದುಮ್ಮಾನ,
ಹದಗೆಡೆಪ ನಂಜಿನುರಿ;
ಖಾಲಿ ಗಡಿಗೆಯ ಸದ್ದಿಗೆ
ಹೆದರಿ ನಡುಗುವ ಎದೆಯ ಪರಿ.
ಮುಚ್ಚಳವ ತೆರೆಯದೆ,
ಕಣ್ತೆರೆದು ನೋಡದೆ,
ಕಿವಿಯಲ್ಲೇ ಕಂಡರೆ –
ಅರಿಯಲೆಲ್ಲಿ ಹುಸಿ ಬೆದರಿಕೆ?
ಸತ್ಯಕೇಕೆ ಸಾಕ್ಷಿಯ ಹೊರೆ?
ಬೆಳಕಿಗೇಕೆ ದೀಪದ ಆಸರೆ?
ಸುಳ್ಳಿಗಷ್ಟೇ ವಕೀಲರ ಕರೆ –
ಮೌನವೇ ಸತ್ಯದ ಸಹಿ ಕೊನೆಗೆ.
~ ಮಾಹೆ
Discover more from Hebbar's blog
Subscribe to get the latest posts sent to your email.
