ಬಲವಿದ್ದಾಗ ಬೀಗುವ ಧೈರ್ಯ,
ಬಳಗವಿದ್ದಾಗ ಬೆಳೆಯುವ ವಿಶ್ವಾಸ,
ಹಣವಿದ್ದಾಗ ನಗುವ ನೆಮ್ಮದಿ
ಮಂಜಿನ ಮೇಲಿನ ಹೆಜ್ಜೆಗಳಷ್ಟೇ.
ಬಿಸಿಲು ಬಂದರೆ ಕರಗಿಹೋಗುವವು.
ಎಲ್ಲ ಆಸರೆಗಳೂ ಕಳಚಿದ ಮೇಲೂ
ಒಳಗೊಂದು ದೀಪ ಉರಿಯುವುದಾದರೆ
ಅದುವೇ ಆತ್ಮವಿಶ್ವಾಸ.
ಜಗವ ನಂಬಿ ನಿಲ್ಲುವುದಲ್ಲ,
ಜಗವ ನಡೆಸುವವನಲಿ ಕರಗುವುದು.
~ ಮಾಹೆ
Discover more from Hebbar's blog
Subscribe to get the latest posts sent to your email.
